Slide
Slide
Slide
previous arrow
next arrow

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡುವಂತೆ ಮನವಿ

300x250 AD

ಯಲ್ಲಾಪುರ: ಪಟ್ಟಣ ಪಂಚಾಯತಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡುವಂತೆ ಪಟ್ಟಣ ಪಂಚಾಯಿತಿ ಸದಸ್ಯ ಸತೀಶ ಎಸ್.ನಾಯ್ಕ ಬುಧವಾರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಎಂ.ಗುರುರಾಜ ಅವರಿಗೆ ಮನವಿ ನೀಡಿ ಆಗ್ರಹಿಸಿದರು.

ಪಟ್ಟಣ ಪಂಚಾಯತದಲ್ಲಿ ದಿ: 29-03-2022 ರಂದು ನಡೆದ ಸಭೆಯಲ್ಲಿ ಪಟ್ಟಣ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ದಿ: 28-03-2023ಕ್ಕೆ ಮುಕ್ತಾಯವಾಗಿದೆ. ಈಗ ಪಟ್ಟಣ ಪಂಚಾಯತದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ಸರಕಾರದಿಂದ ಘೋಷಣೆಯಾಗದ ಕಾರಣ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ.

300x250 AD

ಈ ಕಾರಣಕ್ಕಾಗಿ ಪಟ್ಟಣ ಪಂಚಾಯತ ಆಡಳಿತಾಧಿಕಾರಿ ಆಗಿರುವ ತಾವುಗಳು ತಕ್ಷಣ ದಿನಾಂಕ ನಿಗದಿಗೊಳಿಸಿ ಹೊಸ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಆಡಳಿತ ವ್ಯವಸ್ಥೆ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top